"ನಿನ್ನ ಸಂತೋಷಕ್ಕಾಗಿ ನಾನು ಏನು ಬೇಕಾದ್ರೂ ಮಾಡ್ತೀನಿ ಕಣೋ,
ನನಗೆ ನಿನ್ನ ಸಂತೋಷನೇ ಮುಖ್ಯ ಕಣೋ,
ನಿನ್ನ ಮುಖದಲ್ಲಿ ಈ ನಗು ಯಾವತ್ತು ಹೀಗೆ ಇರಲಿ ಕಣೋ "
ಮನೋಜ್ ಇಲ್ಲದೆ ಕಾವ್ಯಳಿಗೆ ಬೇರೆ ಏನು ಇಲ್ಲ ನಿಂತರು ಅವನೇ ಕುಂತರು ಅವನೇ ಕನಸಲ್ಲೂ ಅವನದೇ ಕನವರಿಕೆ, ಅವಳು ಅವನನ್ನ ಎಷ್ಟು ಪ್ರೀತಿ ಮಾಡ್ತಾ ಇದ್ಲು ಅನ್ನೋದು ಅವಳಿಗೂ ಗೊತ್ತಿರ್ಲಿಲ್ಲ ಅನಿಸುತ್ತೆ. ಅವನಿಗಾಗಿ ಏನು ಬೇಕಾದ್ರೂ ಮಾಡ್ತಾ ಇದ್ಲು, ದಿನಕ್ಕೆ ಒಂದು ಹತ್ತು ಸಲನಾದ್ರು ಮನೋಜನಿಗೆ "ನಿನ್ನ ಸಂತೋಷಕ್ಕೆ ನನ್ನ ಪ್ರಾಣ ಬೇಕಾದ್ರೂ ಕೊಡ್ತೀನಿ ಕಣೋ " ಅಂತಾನೆ ಇದ್ಲು.
ಮನೋಜ ಯಾವಾಗಲು ತಮಾಷೆಯ ಹುಡುಗ ಕಾವ್ಯನ ತುಂಬಾನೇ ರೆಗುಸ್ತ ಇರ್ತಾನೆ ಆದರೆ ಅಷ್ಟೇ ಪ್ರೀತಿ ಕೊಡ ಮಾಡ್ತಾ ಇರ್ತಾನೆ ಫೋನ್ ನಲ್ಲಿ ಅವಳ ದ್ವನಿ ಕೇಳದನೆ ಇವನು ಬೆಳ್ಳಗ್ಗೆ ಎಳೋದಿಲ್ಲ, ರಾತ್ರಿ ಗುಡ್ ನೈಟ್ ಇವನಿಗೆ ಅವಳು ಹೇಳ್ದನೆ ಇವನು ಮಲಗಿರೋ ದಿನಗಳೇ ಇಲ್ಲ, ಅಂತಹ ಪ್ರೀಮಿಗಳು.
ಕಾವ್ಯ ಅವನನ್ನ ಕೆಲವುದಿನ ಗಳಿಂದೇನು ಲವ್ ಮಾಡ್ತಾ ಇರ್ಲಿಲ್ಲ ನಿಜ ಹೇಳ್ಬೇಕು ಅಂದ್ರೆ ಅವನನ್ನ ಕಾವ್ಯ ಸುಮಾರು ವರ್ಷಗಳಿಂದ ಲವ್ ಮಾಡ್ತಾ ಇದ್ಲು ಅಂದ್ರೆ ಅವಳ ಬಾಲ್ಯ ದಿಂದ, ಹೌದು ಮನೋಜ್ ಕಾವ್ಯಳ ಅತ್ತೆ ಮಗ ಅಲ್ಲದೆ ಒಂದೇ ಸ್ಕೂಲ್, ಕಾವ್ಯ ಅವನನ್ನ ಎಷ್ಟು ಹಚ್ಚಿ ಕೊಂಡಿದ್ಲು ಅಂದ್ರೆ ಸ್ಕೂಲ್ ನಲ್ಲಿ ಮೇಸ್ಟ್ರು ಅವನನ್ನ ಸ್ಕೂಲ್ ನಿಂದ ನಾಲ್ಕು ದಿನ ಆಚೆ ಹಾಕಿದರು ಇವಳು ಸಹ ನಾಲ್ಕು ದಿನ ಹುಷಾರಿಲ್ಲ ಅಂತ ತಾನು ಸಹ ಸ್ಕೂಲ್ ಗೆ ಹೋಗಿರಲಿಲ್ಲ ಹಾಲಿನಂತ ಮನಸ್ಸು ಅಷ್ಟೇ ಸೂಕ್ಷ್ಮ ಎಲ್ಲ ವಿಷಯವನ್ನು ತುಂಬಾ ಸೀರೀಸ್ ಆಗಿ ತಗೋತಾ ಇದ್ಲು.
ನೀನು ಈಗ ದೊಡ್ಡ ಹುಡುಗಿ ಮನೋಜ್ ಜೊತೆ ಸುತ್ತುಬೇಡ ಅಂತ ಮನೆಯವರೆಲ್ಲ ಬೈದರು ಯಾರನ್ನು ಲೆಕ್ಕಿಸದೆ ಅವನೇ ನನ್ನ ಸರ್ವಸ್ವ ಅಂತ ನಂಬಿದ ಹುಡುಗಿ. ಅವನು ಅಪ್ಪ ಬೈದ್ರು ಅಮ್ಮ ಹೊಡೆದರು ಅಂತ ಬೇಜಾರ್ ಮಾಡ್ಕೊಂಡ್ರೆ ಕಾವ್ಯ ಅವನನ್ನ ತನ್ನ ತೊಡೆ ಮೇಲೆ ಮಲಗಿಸಿಕೊಂಡು ಸಮಾದಾನ ಮಾಡ್ತಾ ಇದ್ಲು ಅವನು ಅಷ್ಟೇ ಇವಳನ್ನ ಅಷ್ಟೇ ಪ್ರೀತಿ ಮಾಡ್ತಾ ಇದ್ದ. ಹೈಸ್ಕೂಲ್ ಮುಗಿದು ಕಾಲೇಜ್ ಹೋಗುವಾಗಲು ಜೊತೆಗೆ ಹೋಗ್ತಾ ಇದ್ರೂ ಅವನು ಒಂದು ವೇಳೆ ಫ್ರೆಂಡ್ಸ್ ಜೊತೆ ಎಲ್ಲಾದರು ಹೋದ್ರೆ ಇವಳು ಪ್ರತಿ ನಿಮಿಷಕ್ಕೂ ಎಲ್ಲಿದ ಏನು ಮಾಡ್ತಾ ಇದ್ದೀಯ ಇನ್ನು ಯಾವಾಗ ಬರೋದು ಅಂತ ಫೋನ್ ನಲ್ಲೆ ವಿಚಾರಿಸುತ್ತಾ ಇದ್ಲು. ಕಾಲೇಜ್ ಕಂಪಾಸ್ ನಲ್ಲಿ ಅವನು ಬೇರೆ ಹುಡುಗಿಯರ ಜೊತೆ ಒಬ್ಬನೇ ಇರುದನ್ನ ಎಲ್ಲಾದರು ನೋಡಿದ್ರೆ ಇವಳು ಅವನು ಹೋದ ಮೇಲೆ ಆ ಹುಡುಗಿ ಮನೆಗೆ ಹೋಗಿ ಅವರ ಅಪ್ಪ ಅಮ್ಮ ನ ಹತ್ರ ಜಗಳನೇ ಮಾಡಿ ಬಂದಿರೊಳು.
ಮನೆಯವರೆಲ್ಲ ಆದಷ್ಟು ಬೇಗ ಇವರಿಬ್ಬರನ್ನ ಗಂಟ್ಟು ಹಾಕಿ ಕೈ ಬಿಡಬೇಕಪ್ಪ ಅಂತ ತಿರ್ಮಾನ ಮಾಡಿದ್ರು ಅಲ್ಲದೆ ಇನ್ನು ನಾಲ್ಕು ತಿಂಗಳಲ್ಲೇ ಮಧುವೆ ಮಾಡಬೇಕು ಅಂತ ಎಲ್ಲರು ಒಪ್ಪಿಕೊಂಡಿದ್ದರು. ಆಗ ಇವರಿಬ್ಬರನ್ನ ಹಿಡಿಯೋರೆ ಇರ್ಲಿಲ್ಲ, ಈ ವಿಷಯ ತಿಳಿದಾಗ ಹೆಚ್ಚು ಖುಷಿ ಪಟ್ಟಿದ್ದು ಅವನಿಗಿಂತ ಕಾವ್ಯನೇ ಜಾಸ್ತಿ .
ಆದರೆ ಮನೋಜನಿಗೆ ಇದೆ ಮೊರುತಿಂಗಳ ಹಿಂದೆ ಪ್ರೀತಿ ಅನ್ನೋ ಹುಡುಗಿ ಪರಿಚಯವಾಗಿದ್ಲು ಅದೇ ಪರಿಚಯ ಮುಂದುವರೆದು ಆ ಹುಡುಗಿ ಇವನನ್ನ ಲವ್ ಮಾಡು ಅಂತ ಒತ್ತಾಯಿಸುತ್ತ ಇದ್ಲು, ಆದರೆ ಇವನಿಗೆ ಅದು ಒಪ್ಪಿಗೆ ಇರೋಲ್ಲ ನನಗೆ ಆಗಲೇ ಮಧುವೆ ನಿಶ್ಚಯ ಆಗಿದೆ ಅಂತ ತುಂಬಾನೇ ಹೇಳ್ತಾನೇ ಆದರೆ ಪ್ರೀತಿ ಇದ್ಯಾವುದನ್ನು ಕೇಳೋಕೆ ತಯಾರಿರಲಿಲ್ಲ. ಪ್ರೀತಿ ಮನೋಜನಿಗೆ ನೀನು ನನ್ನ ಮಧುವೆ ಆಗದೆ ಇದ್ರೆ ನಾನು ಇವತ್ತೇ ಸತ್ತು ಹೋಗ್ತೀನಿ ಅಂತ ಒಂದು ದಿನ ಇವನ ಎದುರುರಿಗೆ ಆತ್ಮಹತ್ಯಗೆ ಪ್ರಯತ್ನ ಪಟ್ಟಿರ್ತಳೆ ಮನೋಜ ಅವಳ ಸ್ಥಿತಿ ನೋಡೋಕೆ ಆಗದೆ ಇನ್ಮೇಲೆ ಹೀಗೆಲ್ಲ ಮಾಡ್ಕೋ ಬೇಡ ನಾನು ನಿನ್ನ ಲವ್ ಮಾಡ್ತೀನಿ ಅಂತ ಮಾತು ಕೊಟ್ಟು ಮನೆಗೆ ಬರ್ತಾನೆ ತಾನು ಮಾಡ್ತಾ ಇರೋದು ತಪ್ಪು ಅಂತ ಗೊತ್ತಿದ್ರು ಪ್ರೀತಿಗೆ ಮಾತು ಕೊಟ್ನಲ್ಲ ಅಂತ ಮನಸ್ಸಲ್ಲೇ ಕೊರಗುತ್ತ ಇರ್ತಾನೆ ಇನ್ನೇನು ಅವನ ಕಾವ್ಯ ಳ ಮಧುವೆಯ ಒಂದು ವಾರ ಇರುತ್ತೆ ಆಗ ಪ್ರೀತಿ ಇವನಿಗೆ ಒಂದು ಮಸಾಜ್ ಕಳಿಸಿರ್ತಲೇ "ನಾನು ಮಧುವೆ ಆದ್ರೆ ನಿನ್ನನ್ನೇ ಇಲ್ಲ ಅಂದ್ರೆ ನಾನು ಜೀವಂತ ವಾಗಿ ಇರೋಲ್ಲ" ಅಂತ ಕಳಿಸಿರ್ತಳೆ ಇವನಿಗೆ ದಿಕ್ಕೇ ತೋಚದ ಹಾಗೆ ಆಗುತ್ತೆ. ಈ ವಿಷಯನ ಹೇಗಾದ್ರು ಮಾಡಿ ಕಾವ್ಯಗೆ ತಿಳಿಸಿದರೆ ಅವಳೇ ಹೋಗಿ ಪ್ರೀತಿಗೆ ಬುದ್ದಿ ಹೇಳ್ತಾಳೆ ಅಂತ ಒಂದು ದಿನ ಇವನು ಕಾವ್ಯಳನ್ನ ಯಾರು ಇಲ್ಲದ ಸುಂದರವಾದ ಪ್ರದೇಶಕ್ಕೆ ಕರ್ಕೊಂಡು ಹೋಗತ್ತಾನೆ. ಪ್ರೀತಿ ಬಗ್ಗೆ ಎಲ್ಲ ಇವಳಿಗೆ ಹೇಳ್ತಾನೆ.
ಕಾವ್ಯ :- ನೀನು ಈಗ ಏನು ಮಾಡ ಬೇಕು ಅನ್ಕೊಂಡಿದ್ದಿಯ?
ಮನೋಜ :- (ಅವನು ಇವಳನ್ನ ಸುಮ್ಮನೆ ರೆಗಿಸಲೆಂದು ) ಇಲ್ಲ ಕಣೆ ನನಗೆ ಯಾಕೋ ಮನಸ್ಸು ಒಪ್ಪುತ್ತ ಇಲ್ಲ ಅವಳು ನನ್ನ ತುಂಬಾನೇ ಲವ್ ಮಾಡ್ತಾ ಇದಾಳೆ ನಾನೇನಾದ್ರು ಅವಳಿಗೆ ಸಿಗಲ್ಲ ಅಂತ ಗೊತ್ತಾದ್ರೆ ಅವಳು ಸತ್ತು ಬಿಟ್ತಳೆ ನಾನು ಏನು ಮಾಡ್ಲಿ ? ಆಗ ನಾನು ನೆಮ್ಮದಿ ಇಂದ ಇರೋಕೆ ಆಗುತ್ತ ನಾನು ಸಂತೋಷದಿಂದ ಇರೋಕೆ ಆಗುತ್ತ.
ಕಾವ್ಯ :- ಒಂದು ವೇಳೆ ನಾನು ಸತ್ತರೆ ???????
ಮನೋಜ :- ಹಾಗೇನಾದ್ರೂ ಆದರೆ ನಾನು ಅವಳನ್ನೇ ಮಧುವೆ ಆಗ ಬಿಡ್ತೀನಿ. ಆಗ ನಾನು ಅವಳ ಜೊತೆ ಖುಷಿಯಾಗಿ, ಸಂತೋಷದಿಂದ ಇರ್ತೀನಿ ಹ್ಹ ಹ್ಹ ಹ್ಹ ಹ್ಹ (ಅವನು ತಮಾಷೆಗಾಗಿ ಹೇಳ್ತಾನೆ )
ಕಾವ್ಯ :- ನೀನು ನಿಜವಾಗ್ಲೂ ನಾನು ಸತ್ತರೆ ಸಂತೋಷದಿಂದ ಇರ್ತಿಯ ?
ಮನೋಜ :- ಅಯ್ಯೋ ನಿನ್ನ ಆಣೆಗೂ ನಾನು ಸಂತೋಷದಿಂದ ಇರ್ತೀನಿ ಕಣೆ
(ಅವನು ತಮಾಷೆಗಾಗಿ ಹೇಳ್ತಾನೆ )
ವಿಧಿಯ ಆಟ ಶುರುವಾಗಿದ್ದೆ ಇಲ್ಲಿಂದ ಮನೋಜ ಹೇಳಿದ್ದೆಲ್ಲ ನಿಜ ಅಂತ ನಂಬಿದ ಕಾವ್ಯ ಒಂದು ಚೀಟಿಯಲ್ಲಿ
"ನಿನ್ನ ಸಂತೋಷಕ್ಕಾಗಿ ನಾನು ಏನು ಬೇಕಾದ್ರೂ ಮಾಡ್ತೀನಿ ಕಣೋ,
ನನಗೆ ನಿನ್ನ ಸಂತೋಷನೇ ಮುಖ್ಯ ಕಣೋ,
ನಿನ್ನ ಮುಖದಲ್ಲಿ ಈ ನಗು ಯಾವತ್ತು ಹೀಗೆ ಇರಲಿ ಕಣೋ "
ಅಂತ ಬರೆದು ಇಟ್ಟು ಶವದ ಪೆಟ್ಟಿಗೆಯಲ್ಲಿ ತಾನೇ ಶವ ವಾಗಿ ಮಲಗಿರ್ತಳೆ ನನ್ನ ಕತೆಯ ಕಥಾನಾಯಕಿ ಕಾವ್ಯ .
!
!
!
!
!
!
!

ಹಾಗಾದ್ರೆ ಪ್ರೀತಿ ಅಮರ ತ್ಯಾಗ ಮಧುರ ಅಂದ್ರೆ ಇದೇನಾ ?
ಅವಳ ದಾರಿಯಲಿ
ನಿಮ್ಮ "ದೊಡ್ಡಮನಿ.ಮಂಜು"
9742495837
ಮುಂದುವರೆಯುತ್ತದೆ........... !

“ಬತ್ತಿ ಹೋದ ಸಂಗೀತ "ಗಂಗೆ" ಗಂಗೂಬಾಯಿ ಹಾನಗಲ್ ರವರನ್ನು ಮೌನದಲ್ಲಿ ಸ್ಮರಿಸುತ್ತ ”
ಹಿಂದೂಸ್ತಾನಿ ಸಂಗೀತ ಲೋಕದ ಶ್ರೇಷ್ಟ ಗಾಯಕಿ ಗಂಗೂಬಾಯಿ ಹಾನಗಲ್ ಬಗ್ಗೆ ನಾನು ನನ್ನ ಸಣ್ಣ ವಯಸ್ಸಿನಲ್ಲಿ ಪಠ್ಯ ಒಂದರ ಮೊಲಕ ತಿಳಿದುಕೊಂಡಿದ್ದೆ ಹಿಂದೂಸ್ತಾನಿ ಸಂಗೀತ ಮಯಾವಾಗುತ್ತಿರುವ ಈ ಸಮಯದಲ್ಲಿ ಸಂಗಿತದ ಕೋಟೆ ಕಟ್ಟಿ ಮೆರೆದ ಮಹಾನ್ ವ್ಯಕ್ತಿ ನಮ್ಮ ನಾಡಿನ ಗಂಗೊಬಾಯಿ ಹಾನಗಲ್.
ಆಗ ನಂದು ತುಂಬಾ ಸಣ್ಣ ವಯಸ್ಸು ಅದೇನೋ ಹೇಳ್ತಾರಲ್ಲ "ಬಾಯಲ್ಲಿ ಬೇರಲಿಟ್ರೆ ಕಚ್ಚೋಕು ಬರಲ್ಲ" ಅಂತಹ
ವಯಸ್ಸು ನನ್ನದು, ಅಂದು ಒಂದು ದಿನ ನನ್ನ ಶಾಲೆಯಲ್ಲಿ ತುಂಬಾ ನಿಶ್ಯಾಬ್ದದಿಂದ ಕೂಡಿತ್ತು ಅದೇನೋ ಗೊತ್ತಿಲ್ಲ ಎಲ್ಲರು ಅಂದು ಉತ್ಸಾಹದಿಂದ ಕೊತಿದ್ವಿ ಈ ದಿನಕ್ಕಾಗಿ ಕಾಯ್ತಾ ಇದ್ವಿ ಏಕೆಂದರೆ ಅಂದಿನ ವಿಷಯ ಕನ್ನಡ ಗದ್ಯ ಭಾಗದ ಗಂಗೂಬಾಯಿ ಹಾನಗಲ್ ಅವರ ಜೀವನದ
ಬಗ್ಗೆ ಪಾಠ ಮಾಡ್ತಾ ಇದ್ರು
ನಿಜಾ ಹೇಳ್ಬೇಕು ಅಂದ್ರೆ ಅಂದಿನ ಪಾಠನಮ್ಮ ಜೊತೆ ಇದ್ದರೆಗಂಗೂಬಾಯಿ ಹಾನಗಲ್
ನಮ್ಮ ಜೊತೆ ಇದ್ದರೆ ಅನಿಸುತ್ತೆ ಅಲ್ವ !
ಅವರನ್ನ ನಾನು ತುಂಬಾ ಹತ್ತಿರದಿಂದ ನೋಡ್ಬೇಕು ಅಂತ ನನಗೆ ತುಂಬಾನೆ ಆಸೆ ಇತ್ತು ಏಕೆಂದರೆ ಅವರ ಅಭಿಮಾನಿಗಳಲ್ಲಿ ನಾನು ಒಬ್ಬ, ಅಭಿಮಾನಿ ಅಂದಾಕ್ಷಣ ನನಗೆ ಶಾಸ್ತ್ರೀಯ ಸಂಗೀತದ ಬಗ್ಗೆ ಜ್ಞಾನ ಏನು ಇಲ್ಲ ಆದ್ರೆ ಸಂಗೀತ ಕೇಳುವ ಹುಚ್ಚು ಕೇಳುತ್ತಾ ಹಾಡುವ ಹವ್ಯಾಸ ನನಗಿದೆ ಹಾಗಾಗಿ ನಾನು ಸಂಗೀತ ಯಾವುದೇ ಒಂದು ಎಳೆಯನ್ನು ಸಹ ಗೌರವಿಸುತಿನಿ. ಈ ನಾಲ್ಕು ಸಾಲುಗಳು ನನ್ನ ಬ್ಲಾಗ್ ನಲ್ಲಿ ಬರೀಬೇಕು ಅದನ್ನ ಎಲ್ಲರು ಓದಿ ನನ್ನ ಕಾಮೆಂಟ್ಸ್ ಗಳ ಲಿಸ್ಟ್ ಬೆಳಿಬೇಕು ಅಂತ ನಾನು ಬರಿತ ಇಲ್ಲ ನಮ್ಮ ನಿಮ್ಮೆಲ್ಲರನ್ನು ಅಗಲಿದ ಗಂಗೂಬಾಯಿ ಹಾನಗಲ್ ಅವರಿಗೆ ಈ ಮೊಲಕ ನಾನು ಶ್ರದ್ದಾಂಜಲಿ ಸಲ್ಲಿಸುತ್ತಿದ್ದೇನೆ.
ಪ್ರೀತಿಯ ನನ್ನ ಗೆಳೆಯ/ಗೆಳತಿಯರೆ ಇವತ್ತು ನಾವೇನಾದರೂ ಸಾದಿಸ ಬೇಕು ಅಂದು ಕೊಂಡು ಹೊರಟರೆ ನಮ್ಮ ಹಿಂದೆ ಮಾದ್ಯಮಗಳ ಮುಖಾಂತರ ಪ್ರಚಾರ ಸಿಗುತ್ತೆ ಆದರೆ ಯವುದೇ ಪ್ರಚಾರವಿಲ್ಲದೆ ಇಡಿ ವಿಶ್ವವನ್ನೇ ತನ್ನ ಕಡೆಗೆ ಸೆಳೆದುಕೊಂಡ ಸಂಗೀತ ಲೋಕದ ಶ್ರೇಷ್ಟ ಗಾಯಕಿ ನಮ್ಮ
ಗಂಗೂಬಾಯಿ ಹಾನಗಲ್ . ಇದೋ ತಾಯಿ ನಿನಗೆ ನನ್ನ ನಮನ.
ನನ್ನಿಂದ ಇದಿನಿಯ ವರೆಗೂ ಏನನ್ನು ಸಾಡಿಸಲು ಆಗಿಲ್ಲ ಅಂತ ನಾನು ಯಾವತ್ತು ಕೊರಗುವುದಿಲ್ಲ ಏಕೆಂದರೆ " ಸಾದನೆ ಮಾಡಿದವರ ಸ್ಮರಿಸುವುದೇ ಒಂದು ದೊಡ್ಡ ಸಾದನೆ ಅಲ್ವ !
“ಬತ್ತಿ ಹೋದ ಸಂಗೀತದ ನದಿಯನ್ನು "ಗಂಗೆ"ಯಂತೆ ತುಂಬಿಸಲು ಮತ್ತೆ ನೀ ಹುಟ್ಟಿಬಾ"
ಇಂತಿತೇವವಾದ ಕಣ್ಣೀರಿನ ರೆಪ್ಪೆಯಲ್ಲಿ
ನಿಮ್ಮ ದೊಡಮನಿ.ಮಂಜು…
Continue
ನಿಜಾ ಅಲ್ವ ! ಈ ಪ್ರೀತಿನೆ ಹೀಗೆ ಯಾವಾಗ ಯಾರಿಂದ ಯಾರಿಗೆ ಹೇಗೆ ಹುಟ್ಟುತ್ತೆ ಅನ್ನೋದು ಯಾರಿಗೂ ಗೊತ್ತಿರಲ್ಲ ! ಪ್ರೀತಿ ಮಾಡೋರ್ನ ಕೇಳಿ ನೋಡಿ ಅವರೆಲ್ಲ ಹೇಳೋದು ಇಷ್ಟೇ "
ಮಗ ಅವಳನ್ನ ನೋಡಿದ ತಕ್ಷಣ ನನಗೆ ಅವಳು ಇಷ್ಟ ಆಗಿ
ಬಿಟ್ಲು " ಇನ್ನು ಕೆಲವರ್ನ ಕೇಳಿ ನೋಡಿ "ಅದೇಕೋ ಗೊತ್ತಿಲ್ಲ ಕಣೆ ಅವನು ಅಂದ್ರೆ ನನಗೆ ತುಂಬಾ ಇಷ್ಟ " ಅಂತಾರೆ ನಿಜಾ ಹೇಳಬೇಕು ಅಂದ್ರೆ ಅವರಲ್ಲಿ ಈ ಪ್ರೀತಿ ಹುಟ್ಟೋಕೆ ಏನು ಕಾರಣ ಅಂತ ಅವರಿಗೆ ಗೊತ್ತಿರಲ್ಲ ಅಥವಾ ನಾನು ಅವನ/ಅವಳನ್ನ ಯಾಕೆ ಲವ್ ಮಾಡ್ತಾ ಇದೀನಿ ಅಂತ ಗೊತ್ತಿರಲ್ಲ ಆದ್ರು ಅವರೆಲ್ಲ ಲವ್ ಮಾಡ್ತಾನೆ ಇರ್ತಾರೆ ಅಲ್ವ !
ಒಂದು ಸರ್ವೇ
ಪ್ರಕಾರ ಒಬ್ಬ ಹುಡುಗಿ ಒಬ್ಬ ಹುಡುಗನ್ನ ಇಷ್ಟ ಪಡ್ತಾ ಇದ್ದಾಳೆ ಅಂದ್ರೆ ಅವನಲ್ಲಿ ಇರೋ ಒಳ್ಳೆಯ ತನ, ನಿಸ್ವರ್ತ ಸ್ನೇಹ, ಪರಿಶುದ್ದ ಮನಸ್ಸು ಅಥವಾ ಯಾವುದೊ ಒಂದು ಕಾರಣಕ್ಕೆ ಅವಳಿಗೆ ಇಷ್ಟ ಆಗಿರ್ತಾನೆ ಆದ್ರೆ ಇನ್ನು ಕೆಲವರು ಹಾಗಲ್ಲ "ದಿನಕೊಂದು ಬೈಕ್ ತಗೊಂಡು ಫಿಲಂ ತೋರಿಸಿ ಅಲ್ಲಿ ಇಲ್ಲಿ ಸುತ್ತುಹರಿಸಿ ಕೇಳಿದನ್ನೆಲ್ಲ ಕೊಡಿಸುವಂತ ಹುಡುಗನ್ನೇ ಇಷ್ಟ ಪಡ್ತಾರೆ "
ಹಾಗಾದ್ರೆ
ಪ್ರೀತಿ ಅಂದ್ರೆ ಇದೇನಾ ? ಅಲ್ಲ ! ಅದು ಕೇವಲ ಆಕರ್ಷಣೆ ಮಾತ್ರ "ಪ್ರೀತಿ ಅನ್ನೋದು ಒಂದು ತಪಸ್ಸು". ಅದು ನಮಗೆ ಬೇಕೆಂದಾಗ ಬಯಸೋಕೆ, ಬೇಡ ಅಂದಾಗ ಬಿಸಾಡೋಕೆ ಮರದಲ್ಲಿ ಇರೋ ಹಣ್ಣು ಅಲ್ಲ ಮನೇಲಿ ಸಾಕೋ ಗಿಳಿನು ಅಲ್ಲ . ಈ ಪ್ರೀತಿ ಹುಟ್ಟುಬೇಕಾದ್ರೆ ಯಾರಿಗೂ
ಹೇಳಿ ಕೇಳಿ ಹುಟ್ಟಲ್ಲ ಹುಟ್ಟೋಕೆ ಯಾರ ಅಪ್ಪಣೆನು ಬೇಕಿಲ್ಲ ಯಾಕೆಂದರೆ
ಹೇಳಿ ಬರುವುದು ಜೀವನ.ಹೇಳದೆ ಬರುವುದು ಸಾವು.ತಿಳಿದು ತಿಳಿಯದೆ ಆಗುವುದು ಪ್ರೀತಿ.ಈ ಪ್ರೀತಿನ ಪ್ರೀತಿಯಿಂದ ಪ್ರೀತಿಸಿದರೆ ಪ್ರೀತಿ ಪ್ರೀತಿಯಾಗಿರುತ್ತೆ ಏಕೆಂದರೆ ಪ್ರೀತಿಯನ್ನು ಪ್ರೀತಿಸುವ ಪ್ರೀತಿ ಪ್ರೀತಿಗಾಗಿ ಪ್ರೀತಿಸುವ ಪ್ರೀತಿಯನ್ನು ಪ್ರೀತಿಸುತ್ತದೆ ! ಅಲ್ವ !

ನನ್ನ ನೀ
ಒಂದು ಕ್ಷಣವೂ
ಪ್ರೀತಿಸದಿದ್ದರು ಚಿಂತೆಯಿಲ್ಲ
ಕಡೆಯ ಪಕ್ಷ
ನಿನ್ನ ಕಿರು ನಗೆಯ ವರವ
ಕೊಡುವುದಾದರೆ ಚಿತೆಯಿಂದ
ಎದ್ದು ಬಂದು ಸ್ವೀಕರಿಸುವೆ
ಮರು ಜನ್ಮಕೆ ಕರುಣಿಸುವುದಾದರೆ
ಈ ಕ್ಷಣವೇ ಮಡಿದು
ನನ್ನೊಲವಿನ ಗೋರಿಯಾಗುವೆ,,,,,

ನನ್ನ ಎರಡು ಕಣ್ಣುಗಳು
ಕುರುಡಾಗಿ ಹೋಗಲಿ ದೇವರೇ,,,,,
ನನ್ನವಳ ಸೌಂದರ್ಯ ನಾ ಕಂಡ ದಿನವೇ,,,,,
ನನ್ನ ಎರಡು ಕಿವಿಗಳು
ಕಿವುಡಾಗಿ ಹೋಗಲಿ ದೇವರೇ,,,,,
ನನ್ನವಳ ಮಧುರ ಸ್ವರವನ್ನು
ಕೇಳಿದ ತಕ್ಷಣವೇ,,,,,
ನಾ ನಾಡುವ ಮಾತುಗಳೆಲ್ಲ
ನಿಂತು ಹೋಗಲಿ ದೇವರೇ,,,,,
ನನ್ನ ಪ್ರೀತಿ ನನ್ನವಳಿಗೆ ಹೇಳಿದ
ಮರುಕ್ಷಣವೇ,,,,,
ನನ್ನ ಈ ಉಸಿರೇ
ನಿಂತು ಹೋಗಲಿ ದೇವರೇ,,,,,
ನನ್ನವಳು ನನ್ನ ನೋಡಿ
ನಕ್ಕ ಕ್ಷಣವೇ,,,,,
ನನ್ನ ಉಸಿರುನಿಂತ ಬಳಿಕ
ಅವಳ ದಾರಿಯಲಿ ನನ್ನನ್ನು
ಶಿಲೆಯಾಗಿ ಮಾಡು ದೇವರೇ,,,,,
ಆ ಶಿಲೆಯಲ್ಲು ನನ್ನ ಹೃದಯ
ಅವಳ ಹೆಸರನ್ನೇ ಜಪಿಸುತದ್ದೆ,,,,,
*******